ಮತ್ತೆ ಶುರುವಾಗಿದೆ ಡಬ್ಬಿಂಗ್ ಡಿಸ್ಕಶನ್. ಇದು ಯಾವಾಗ ಶುರು ಆಗುತ್ತೋ ಯಾವಾಗ ಮುಗಿದು ಹೋಗುತ್ತದೋ ಗೊತ್ತೇ ಆಗಲ್ಲ. "ಇಲ್ಲೊಂದು ಸಮಸ್ಯೆ ಖಂಡಿತಾ ಇದೆ" ಅನ್ನೋದು ಮತ್ತೊಮ್ಮೆ ಈ ಚರ್ಚೆ ಶುರುವಾದಾಗಲೇ. ಮೊನ್ನೆ ನ್ಯೂಸ್ ನೋಡ್ತಾ ಇದ್ದೆ. ಎಂದಿನ "ಕನ್ನಡದ ರಕ್ಷಕರ" ಜೊತೆಗೂಡಿ ನವರಸ ನಾಯಕ ಜಗ್ಗೇಶ್ ಬಬ್ರುವಾಹನನಾಗೇ ಅಬ್ಬರಿಸಿ ಬೊಬ್ಬಿರಿತಾ ಜೈಲಿಗೆ ಹೋದರು ಸರಿ ಚಿತ್ರಮಂದಿರಕ್ಕೆ ಬೆಂಕಿ ಹಚ್ಚುವುದಕ್ಕೂ ಸರಿ ಎನ್ನುತ್ತಿದ್ದರು. ಇಷ್ಟು ಬಾರಿ ಈ ಚರ್ಚೆ ಪ್ರಸ್ತುತಕ್ಕೆ ಬಂದರೂ ಬಡಪಾಯಿಗಳಾದ ನಮನ್ನು ಅಂದರೆ ವೀಕ್ಷಕರನ್ನುನಿಮಗೇನು ಬೇಕ್ರಪ್ಪ ಅಂತ ಕೇಳೋ ಸೌಜನ್ಯ ಸಹ ಮಾಧ್ಯಮಗಳಿಗಿಲ್ಲ. ಸರಿ ಅವರು ಕೆಳದಿದ್ದರೇನಂತೆ ನಮ್ಮ ಮುಕ್ತ ಅಭಿಪ್ರಾಯವನ್ನು ತಿಳಿಸಲು ಸಾಮಾಜಿಕ ಜಾಲತಾಣಗಳಿವೆಯಲ್ಲ.
ನಾನು ಈ ವಿಷಯವನ್ನು ಮೂರು ವಿಭಾಗಗಳಾಗಿ ನೋಡಲು ಇಚ್ಛಿಸುತ್ತೇನೆ.
1. ಕನ್ನಡದ ಅಳಿವು ಉಳಿವು
2. ಸ್ಪರ್ಧಾತ್ಮಕತೆ
3. ಹಕ್ಕು
1. ಕನ್ನಡದ ಅಳಿವು ಉಳಿವು:
ಮೊದಲಿಗೆ ಡಬ್ಬಿಂಗ್ ಇಂದ ಕನ್ನಡಕ್ಕೆ ತೊಂದರೆ. ಇದು ಕನ್ನಡದ ಅಳಿವು ಉಳಿವಿನ ಪ್ರಶ್ನೆ ಎಂಬ ಭಾವನಾತ್ಮಕ ವಾದವನ್ನು ಚಿತ್ರರಂಗದವರು ಬಿಡಬೇಕು ಎನ್ನುವುದು ನನ್ನ ಪ್ರಾರ್ಥನೆ. ಇದು ಕೇವಲ ಚಿತ್ರರಂಗದ ಸಮಸ್ಯೆ. ಇದಕ್ಕೂ ಭಾಷೆಗೂ ಯಾವುದೇ ನಂಟಿಲ್ಲ. ಚಲನಚಿತ್ರಗಳ ಮೂಲಕ ಭಾಷೆಯ ಮೌಲ್ಯವನ್ನು ಹೆಚ್ಚಿಸುತ್ತಿದ್ದ ಅಂಶ ವರನಟ ರಾಜ್ ಕುಮಾರ್ ಅವರೊಂದಿಗೆ ಮಣ್ಣಾಗಿ ಹೋಯಿತು. ಈಗ ಚಲನಚಿತ್ರರಂಗ ಉಳಿದವುಗಳಂತೆ ಒಂದು ಉದ್ಯಮ. I might sound harsh but i feel it is the reality.
ಕನ್ನಡದ ನಟ ನಟಿಯರಿಗೆ ಕನ್ನಡಿಗರಿಗೆ ಸಿಗುತ್ತಿರುವ ಮನೋರಂಜನೆ ಅದರಿಂದಾಗುತ್ತಿರುವ ಬೌದ್ಧಿಕ ಪರಿಣಾಮಗಳ ಅರಿವಿದ್ದಿದ್ದರೆ ಇಷ್ಟು ದಿನಗಳಲ್ಲಿ ಒಬ್ಬರಾದರು ನಮ್ಮ ಕಿರುತೆರೆಯಲ್ಲಿ ಬರುತ್ತಿರುವ ಅಷ್ಟ ದರಿದ್ರ ಧಾರಾವಾಹಿಗಳ ಬಗ್ಗೆ ಚಕಾರವೆತ್ತಿರಬೇಕಿತ್ತು ಅಲ್ಲವೇ. ಮನೆಯಲ್ಲಿಯೇ ಕೊಲೆಗಡುಕಿ ಇದ್ದರು ಯಾರಿಗೂ ತಿಳಿಯದಿರುವ ಧಾರವಾಹಿ ಒಂದಾದರೆ . . . ಇನ್ನು ಮೂರರಲ್ಲಿ ಭೂತ ಪ್ರೇತ ಆತ್ಮ . . . ಒಂದು ಸೀರಿಯಲ್ ಅವರು ಬರೋದು ಮದ್ವೆ ಮಾಡ್ಸೋದು ಮತ್ತೊಂದು ಅದೇ ಕಥೆಯ ಧಾರವಾಹಿ . . . ದೇವ್ರೇ ಕಾಪಾಡಬೇಕು ಇವುಗಳನ್ನು ನೋಡುವ ನಮ್ಮ ತಾಯಂದಿರನ್ನು. ಪಾಪ ಆ ಪ್ರಾಣೇಶ್ ಬಡ್ಕೊಂಡ್ ಬಡ್ಕೊಂಡ್ ಸುಸ್ತಾಗಿರ್ಬೇಕು ಈ ಧಾರಾವಾಹಿಗಳ ಬಗ್ಗೆ .ಕೊನೆಗೆ ಸೀತಾರಾಮ್ ಸೇತುರಾಂ ಅವರುಗಳನ್ನು ಮನೆಗೆ ಕಳುಹಿಸಿ ಈಗ ಹಿಂದಿ ಇಂದ ಧಾರಾವಾಹಿಗಳನ್ನು ರಿಮೇಕ್ ಮಾಡುತ್ತಿದ್ದಾರೆ ನಮ್ಮ ದಿಗ್ಗಜರುಗಳು !!!
ಮಾಲ್ಗುಡಿ ಡೇಸ್, ಗುಡ್ಡದ ಭೂತ, ಗೃಹ ಭಂಗ, ಮಾಯಾಮೃಗ, ಮನ್ವಂತರ ಇಂತಹ ಧಾರಾವಾಹಿಗಳು ಬರುತ್ತಿದ್ದ ನಮ್ಮ ಕಿರುತೆರೆ ಈಗ ತಿಪ್ಪೆಗುಂಡಿ. ಮೊದಲು ಸರ್ಕಾರದವರು ಈ ಮೆಗಾ ಧಾರಾವಾಹಿಗಳಿಗೆ ಎರಡು ಇಲ್ಲ ಮೂರು ವರ್ಷಗಳ ಗರಿಷ್ಟ ಮಿತಿ ಇಡುವ ಕಾನೂನು ಒಂದನ್ನು ತರಬೇಕು. ಏನ್ ಜನ ನೋಡ್ತಾರೆ ಅಂತ ಎಳೆದಿದ್ದು ಎಳೆದಿದ್ದೇ.
ಇದು ಚಿತ್ರರಂಗದ ತೊಂದರೆಯಲ್ಲ ಕಿರುತೆರೆಯದು ಅನ್ನುವುದಾದರೆ ಡಬ್ಬಿಂಗ್ ನಿಂದ ಕನ್ನಡಕ್ಕೆ ಹಾನಿ ಅನ್ನುವುದನ್ನು ನಿಲ್ಲಿಸಿ.
2. ಸ್ಪರ್ಧಾತ್ಮಕತೆ:
ಒಬ್ಬ ಸಾಫ್ಟ್ವೇರ್ ಉದ್ಯೋಗಿ ಕೇವಲ ಭಾರತವಲ್ಲ ಜಗತ್ತಿನಲ್ಲಿರುವ ಅನೇಕರೊಂದಿಗೆ ಸೆಣೆಸಿ ಜಯಿಸಬೇಕಾಗುತ್ತದೆ. ಯಾವುದೇ ಕ್ಷೇತ್ರ ತೆಗೆದುಕೊಳ್ಳಿ ಅಲ್ಲಿರುವ ಸ್ಪರ್ಧಾತ್ಮಕತೆ ಅಪಾರ.
ಆಗಿರುವಾಗ ನಮ್ಮ ಚಲನಚಿತ್ರರಂಗದವರಿಗೆ ಕೇವಲ ಕನ್ನಡದ ಉದ್ಯಮ ಮಾತ್ರ ಏಕೆ ಸವಾಲಿನ ಕ್ಷೇತ್ರವಾಗಿರಬೇಕು. ಅವರುಗಳು ಬೇರೆಯವರೊಂದಿಗೆ ಸ್ಪರ್ಧೆಗಿಳಿದು ನಮ್ಮ ಸಾಮರ್ಥ್ಯ ತೋರಿಸುವುದು ಯಾವಾಗ .
ಇನ್ನು ಎಷ್ಟು ದಿನ ಹೀಗೆ ಸವಾಲಿಗೆ ಬೆನ್ನುತೋರಿಸುವುದು.
ನಮ್ಮ ರಂಗಿತರಂಗ, ಗೋಧಿ ಬಣ್ಣ ಯಾವುದಕ್ಕೂ ಕಮ್ಮಿ ಇರಲಿಲ್ಲ ಅಲ್ಲವೇ. ರಿಮೇಕ್ ಗಳಿಗೆ ಕಡಿವಾಣ ಹಾಕದಿದ್ದರೆ ನಮ್ಮ ಸೃಜನಾತ್ಮಕ ಮಂದಿ ಯಾವಾಗ ಹೆಚ್ಚೆಚ್ಚು ಅವಕಾಶಗಳು ದೊರೆಯುವುದು.
ಕೆಲಸ ಸಿಗಲಿ ಎಂಬ ಏಕೈಕ ಉದ್ದೇಶದಿಂದ ಚಲನಚಿತ್ರಗಳು ಮಾಡುವುದಾದರೆ ಚಲನಚಿತ್ರರಂಗ ಸಹ MGNREGA scheme ಅಲ್ಲವೇ .
ಸುಮ್ಮನೆ ನಮ್ಮ ಹೀರೋಗಳು ಬಡ ಕಾರ್ಮಿಕರ ಹೆಸರು ಹೇಳಿಕೊಂಡು ರಿಮೇಕ್ ಮಾಡುತ್ತಿದ್ದಾರೆ ಅಷ್ಟೇ. ಉದಯ್-ಅನಿಲ್ ಸಾವು ನೋಡಿದರೆ ತಿಳಿಯುತ್ತದೆ ನಮ್ಮ ದೊಡ್ಡ ಮಂದಿಗೆ ಕಾರ್ಮಿಕರ ಮೇಲಿನ ಕಾಳಜಿ.
3. ಹಕ್ಕು:
ಅಲ್ಲ ಸ್ವಾಮಿ ಇವರುಗಳು ತಮ್ಮ ಕುಟುಂಬ ಸಮೇತಾರಾಗಿ ಮಲ್ಟಿಪ್ಲೆಕ್ಸ್ ಗಳಲ್ಲಿ ಯಾವುದೇ ಭಾಷೆಯ ಯಾವುದೇ ಚಲನಚಿತ್ರವನ್ನು ನೋಡಬಹುದು. ಆದರೆ ಆ ಭಾಷೆ ಬರದಿರುವ ಬಡಪಾಯಿ ಆ ಚಿತ್ರವನ್ನು ಕನ್ನಡದಲ್ಲಿ ನೋಡಬಾರದು ಎನ್ನಲು ಇವರಿಗೇನು ಹಕ್ಕಿದೆ. ನಮ್ಮ ಹಳ್ಳಿಯ ಪುಟಾಣಿಗಳೇಕೆ The Jungle Book, Ice Age ಚಿತ್ರಗಳನ್ನು ನೋಡಬಾರದು. ಇವುಗಳನ್ನು ನಮ್ಮವರು ರಿಮೇಕ್ ಮಾಡಬಲ್ಲರೇ. ನಮ್ಮವರು ಏಕೆ Discovery, Animal Planet, National Geography ಈ ಚಾನೆಲ್ ಕಾರ್ಯಕ್ರಮಗಳನ್ನು ನೋಡಬಾರದು ಹೇಳಿ.
ಮೇಲೆ ಹೇಳಿರುವ ಎಲ್ಲ ಕಾರಣಗಳಿಂದಾಗೇ #ISupportDubbinginKannada.
ನಾನು ಈ ವಿಷಯವನ್ನು ಮೂರು ವಿಭಾಗಗಳಾಗಿ ನೋಡಲು ಇಚ್ಛಿಸುತ್ತೇನೆ.
1. ಕನ್ನಡದ ಅಳಿವು ಉಳಿವು
2. ಸ್ಪರ್ಧಾತ್ಮಕತೆ
3. ಹಕ್ಕು
1. ಕನ್ನಡದ ಅಳಿವು ಉಳಿವು:
ಮೊದಲಿಗೆ ಡಬ್ಬಿಂಗ್ ಇಂದ ಕನ್ನಡಕ್ಕೆ ತೊಂದರೆ. ಇದು ಕನ್ನಡದ ಅಳಿವು ಉಳಿವಿನ ಪ್ರಶ್ನೆ ಎಂಬ ಭಾವನಾತ್ಮಕ ವಾದವನ್ನು ಚಿತ್ರರಂಗದವರು ಬಿಡಬೇಕು ಎನ್ನುವುದು ನನ್ನ ಪ್ರಾರ್ಥನೆ. ಇದು ಕೇವಲ ಚಿತ್ರರಂಗದ ಸಮಸ್ಯೆ. ಇದಕ್ಕೂ ಭಾಷೆಗೂ ಯಾವುದೇ ನಂಟಿಲ್ಲ. ಚಲನಚಿತ್ರಗಳ ಮೂಲಕ ಭಾಷೆಯ ಮೌಲ್ಯವನ್ನು ಹೆಚ್ಚಿಸುತ್ತಿದ್ದ ಅಂಶ ವರನಟ ರಾಜ್ ಕುಮಾರ್ ಅವರೊಂದಿಗೆ ಮಣ್ಣಾಗಿ ಹೋಯಿತು. ಈಗ ಚಲನಚಿತ್ರರಂಗ ಉಳಿದವುಗಳಂತೆ ಒಂದು ಉದ್ಯಮ. I might sound harsh but i feel it is the reality.
ಕನ್ನಡದ ನಟ ನಟಿಯರಿಗೆ ಕನ್ನಡಿಗರಿಗೆ ಸಿಗುತ್ತಿರುವ ಮನೋರಂಜನೆ ಅದರಿಂದಾಗುತ್ತಿರುವ ಬೌದ್ಧಿಕ ಪರಿಣಾಮಗಳ ಅರಿವಿದ್ದಿದ್ದರೆ ಇಷ್ಟು ದಿನಗಳಲ್ಲಿ ಒಬ್ಬರಾದರು ನಮ್ಮ ಕಿರುತೆರೆಯಲ್ಲಿ ಬರುತ್ತಿರುವ ಅಷ್ಟ ದರಿದ್ರ ಧಾರಾವಾಹಿಗಳ ಬಗ್ಗೆ ಚಕಾರವೆತ್ತಿರಬೇಕಿತ್ತು ಅಲ್ಲವೇ. ಮನೆಯಲ್ಲಿಯೇ ಕೊಲೆಗಡುಕಿ ಇದ್ದರು ಯಾರಿಗೂ ತಿಳಿಯದಿರುವ ಧಾರವಾಹಿ ಒಂದಾದರೆ . . . ಇನ್ನು ಮೂರರಲ್ಲಿ ಭೂತ ಪ್ರೇತ ಆತ್ಮ . . . ಒಂದು ಸೀರಿಯಲ್ ಅವರು ಬರೋದು ಮದ್ವೆ ಮಾಡ್ಸೋದು ಮತ್ತೊಂದು ಅದೇ ಕಥೆಯ ಧಾರವಾಹಿ . . . ದೇವ್ರೇ ಕಾಪಾಡಬೇಕು ಇವುಗಳನ್ನು ನೋಡುವ ನಮ್ಮ ತಾಯಂದಿರನ್ನು. ಪಾಪ ಆ ಪ್ರಾಣೇಶ್ ಬಡ್ಕೊಂಡ್ ಬಡ್ಕೊಂಡ್ ಸುಸ್ತಾಗಿರ್ಬೇಕು ಈ ಧಾರಾವಾಹಿಗಳ ಬಗ್ಗೆ .ಕೊನೆಗೆ ಸೀತಾರಾಮ್ ಸೇತುರಾಂ ಅವರುಗಳನ್ನು ಮನೆಗೆ ಕಳುಹಿಸಿ ಈಗ ಹಿಂದಿ ಇಂದ ಧಾರಾವಾಹಿಗಳನ್ನು ರಿಮೇಕ್ ಮಾಡುತ್ತಿದ್ದಾರೆ ನಮ್ಮ ದಿಗ್ಗಜರುಗಳು !!!
ಮಾಲ್ಗುಡಿ ಡೇಸ್, ಗುಡ್ಡದ ಭೂತ, ಗೃಹ ಭಂಗ, ಮಾಯಾಮೃಗ, ಮನ್ವಂತರ ಇಂತಹ ಧಾರಾವಾಹಿಗಳು ಬರುತ್ತಿದ್ದ ನಮ್ಮ ಕಿರುತೆರೆ ಈಗ ತಿಪ್ಪೆಗುಂಡಿ. ಮೊದಲು ಸರ್ಕಾರದವರು ಈ ಮೆಗಾ ಧಾರಾವಾಹಿಗಳಿಗೆ ಎರಡು ಇಲ್ಲ ಮೂರು ವರ್ಷಗಳ ಗರಿಷ್ಟ ಮಿತಿ ಇಡುವ ಕಾನೂನು ಒಂದನ್ನು ತರಬೇಕು. ಏನ್ ಜನ ನೋಡ್ತಾರೆ ಅಂತ ಎಳೆದಿದ್ದು ಎಳೆದಿದ್ದೇ.
ಇದು ಚಿತ್ರರಂಗದ ತೊಂದರೆಯಲ್ಲ ಕಿರುತೆರೆಯದು ಅನ್ನುವುದಾದರೆ ಡಬ್ಬಿಂಗ್ ನಿಂದ ಕನ್ನಡಕ್ಕೆ ಹಾನಿ ಅನ್ನುವುದನ್ನು ನಿಲ್ಲಿಸಿ.
2. ಸ್ಪರ್ಧಾತ್ಮಕತೆ:
ಒಬ್ಬ ಸಾಫ್ಟ್ವೇರ್ ಉದ್ಯೋಗಿ ಕೇವಲ ಭಾರತವಲ್ಲ ಜಗತ್ತಿನಲ್ಲಿರುವ ಅನೇಕರೊಂದಿಗೆ ಸೆಣೆಸಿ ಜಯಿಸಬೇಕಾಗುತ್ತದೆ. ಯಾವುದೇ ಕ್ಷೇತ್ರ ತೆಗೆದುಕೊಳ್ಳಿ ಅಲ್ಲಿರುವ ಸ್ಪರ್ಧಾತ್ಮಕತೆ ಅಪಾರ.
ಆಗಿರುವಾಗ ನಮ್ಮ ಚಲನಚಿತ್ರರಂಗದವರಿಗೆ ಕೇವಲ ಕನ್ನಡದ ಉದ್ಯಮ ಮಾತ್ರ ಏಕೆ ಸವಾಲಿನ ಕ್ಷೇತ್ರವಾಗಿರಬೇಕು. ಅವರುಗಳು ಬೇರೆಯವರೊಂದಿಗೆ ಸ್ಪರ್ಧೆಗಿಳಿದು ನಮ್ಮ ಸಾಮರ್ಥ್ಯ ತೋರಿಸುವುದು ಯಾವಾಗ .
ಇನ್ನು ಎಷ್ಟು ದಿನ ಹೀಗೆ ಸವಾಲಿಗೆ ಬೆನ್ನುತೋರಿಸುವುದು.
ನಮ್ಮ ರಂಗಿತರಂಗ, ಗೋಧಿ ಬಣ್ಣ ಯಾವುದಕ್ಕೂ ಕಮ್ಮಿ ಇರಲಿಲ್ಲ ಅಲ್ಲವೇ. ರಿಮೇಕ್ ಗಳಿಗೆ ಕಡಿವಾಣ ಹಾಕದಿದ್ದರೆ ನಮ್ಮ ಸೃಜನಾತ್ಮಕ ಮಂದಿ ಯಾವಾಗ ಹೆಚ್ಚೆಚ್ಚು ಅವಕಾಶಗಳು ದೊರೆಯುವುದು.
ಕೆಲಸ ಸಿಗಲಿ ಎಂಬ ಏಕೈಕ ಉದ್ದೇಶದಿಂದ ಚಲನಚಿತ್ರಗಳು ಮಾಡುವುದಾದರೆ ಚಲನಚಿತ್ರರಂಗ ಸಹ MGNREGA scheme ಅಲ್ಲವೇ .
ಸುಮ್ಮನೆ ನಮ್ಮ ಹೀರೋಗಳು ಬಡ ಕಾರ್ಮಿಕರ ಹೆಸರು ಹೇಳಿಕೊಂಡು ರಿಮೇಕ್ ಮಾಡುತ್ತಿದ್ದಾರೆ ಅಷ್ಟೇ. ಉದಯ್-ಅನಿಲ್ ಸಾವು ನೋಡಿದರೆ ತಿಳಿಯುತ್ತದೆ ನಮ್ಮ ದೊಡ್ಡ ಮಂದಿಗೆ ಕಾರ್ಮಿಕರ ಮೇಲಿನ ಕಾಳಜಿ.
3. ಹಕ್ಕು:
ಅಲ್ಲ ಸ್ವಾಮಿ ಇವರುಗಳು ತಮ್ಮ ಕುಟುಂಬ ಸಮೇತಾರಾಗಿ ಮಲ್ಟಿಪ್ಲೆಕ್ಸ್ ಗಳಲ್ಲಿ ಯಾವುದೇ ಭಾಷೆಯ ಯಾವುದೇ ಚಲನಚಿತ್ರವನ್ನು ನೋಡಬಹುದು. ಆದರೆ ಆ ಭಾಷೆ ಬರದಿರುವ ಬಡಪಾಯಿ ಆ ಚಿತ್ರವನ್ನು ಕನ್ನಡದಲ್ಲಿ ನೋಡಬಾರದು ಎನ್ನಲು ಇವರಿಗೇನು ಹಕ್ಕಿದೆ. ನಮ್ಮ ಹಳ್ಳಿಯ ಪುಟಾಣಿಗಳೇಕೆ The Jungle Book, Ice Age ಚಿತ್ರಗಳನ್ನು ನೋಡಬಾರದು. ಇವುಗಳನ್ನು ನಮ್ಮವರು ರಿಮೇಕ್ ಮಾಡಬಲ್ಲರೇ. ನಮ್ಮವರು ಏಕೆ Discovery, Animal Planet, National Geography ಈ ಚಾನೆಲ್ ಕಾರ್ಯಕ್ರಮಗಳನ್ನು ನೋಡಬಾರದು ಹೇಳಿ.
ಮೇಲೆ ಹೇಳಿರುವ ಎಲ್ಲ ಕಾರಣಗಳಿಂದಾಗೇ #ISupportDubbinginKannada.

Letter to letter what u wrote in this is true and the way of writing is very nice gunda...
ReplyDeleteEven i too felt many times to share something about current issues and the way society reacting to some issues and their mentality and people especially the children and so called youth growth in our country. but I couldn't able to write because of my busy schedules..
u keep on writing buddy. Good job don't stop this write at least one article per week or month.
Interesting points, nicely conveyed in a simple manner. I completely agree about all the 3 points and I hope someone fires all the crappy serials asap.
ReplyDelete-Sharan