Sunday, January 27, 2013

ಕನಸುಗಳ ಬೆನ್ನತಿ ಹೊರಟವರು ....

ಈ ಲೇಖನವನ್ನು ಎರಡು ರೀತಿಯಾಗಿ ಬರೆಯಬಹುದೆಂದು ಯೋಚನೆ ಬಂತು. ಒಂದು ನನ್ನ ಬಗ್ಗೆಯೇ ಬರೆಯುತ್ತಾ ಹೋಗುವುದು; ನನ್ನದೇ ಬ್ಲಾಗ್ ತಪ್ಪೇನಿಲ್ಲ ಅನ್ನಿ ;) ಆದರೆ ಅದು ನನ್ನ ಆತ್ಮಕಥನವಾಗಿಬಿಡುತ್ತದೆ. ಅದು ಹಾಗೆ ಆಗದೇ ಊರು ಬಿಟ್ಟು ಬೇರೆಡೆ ಓದುವ , ಬೇರೆಡೆ ದುಡಿಯುವ ಹಳ್ಳಿಗರ ಕಥೆ-ವ್ಯಥೆ ಆಗಬೇಕೆಂಬ ಆಶಯದಿಂದ ಎರಡನೇ ರೀತಿ ಆಯ್ದುಕೊಂಡೆ. ತುಂಬ ವಿಸ್ತಾರವಾದ ವಿಷಯವಾದರೂ ಚೊಕ್ಕದಾಗಿ ಬರೆಯಬೇಕೆನ್ನುವ ಆಸೆ, ನೋಡೋಣ ಏನಾಗುವುದೋ ಎಂದು.

ಎಲ್ಲೋ ಹುಟ್ಟಿ, ಯಾವುದೋ ಪ್ರದೇಶದಲ್ಲಿ ಬೆಳೆದು,ಮತ್ಯಾವುದೋ ಪ್ರದೇಶದಲ್ಲಿ ವಾಸಿಸುವುದು ಈ ಔದ್ಯೊಗಿಕ, ಜಾಗತಿಕ ಯುಗದಲ್ಲಿ ಪ್ರತಿಯೊಬ್ಬ ಹಳ್ಳಿಗನು ಎದುರಿಸಲೇಬೇಕಾದ ಕಟು ಸತ್ಯ.
ಮಾಲಿನ್ಯವಿಲ್ಲದ,ಸುಂದರ ಪರಿಸರದ,ಗುಡ್ಡ ಬೆಟ್ಟ ಕೆರೆ ತೊರೆ,ಹೊಲ ಗದ್ದೆ,ಪ್ರಾಣಿ ಪಕ್ಷಿ,ಜಾನಪದ ಸೊಗಡಿನ ಜಾತ್ರೆ ಉತ್ಸವ ಇಂತಹ ಹತ್ತಾರು ಹಲವಾರು ವಿಶೇಷತೆಗಳು ತುಂಬಿರುವ ಸಣ್ಣ ಹಳ್ಳಿಗಳಲ್ಲಿ ಜನಿಸಿರುತ್ತೇವೆ.
ತಂದೆ ತಾಯಿ, ಬಂಧು ಬಳಗ ಇವರುಗಳ ಪ್ರೀತಿಯ ಪಲ್ಲಕ್ಕಿಯಲ್ಲಿ ಮೆರೆಯುತ್ತಿರುತ್ತೇವೆ. ಅಲ್ಲಿನ ಆಟಗಳೇ ಬೇರೆ, ಪಾಠದ ರೀತಿಯೇ ಬೇರೆ ಅಲ್ಲಿ ಕನ್ನಡ ಮಾಧ್ಯಮವಾಗಲಿ ಆಂಗ್ಲ ಮಾಧ್ಯಮವಾಗಲಿ ಎಲ್ಲ ಒಂದೇ ...
ಚೆನ್ನಾಗಿ ಓದುತಿದ್ದರೆ, ಪರೀಕ್ಷೆಗಳಲ್ಲಿ ಉನ್ನತ ಶ್ರೇಣಿಯಲ್ಲಿ ಪಾಸಾದರೆ ಪ್ರತಿಯೊಬ್ಬರ ಮನೆಯಲ್ಲೂ ನಮ್ಮ ಹೆಸರು, ನಾವು ಯಾರೆಂಬುದು ಗೊತ್ತಿರುತ್ತದೆ.
ಅಲ್ಲಿ ನಾವು ಎದುರಿಸಬೇಕಾದ ಸ್ಪರ್ಧಾ ಜಗತ್ತಿಗೆ ಮಿತಿ ಇರುತ್ತದೆ. ಆದರೆ ಇಲ್ಲಿ ಸಿಗುವ ಅನುಭವ ಅನನ್ಯ. ಇಲ್ಲಿ ಕಲಿಯುವ ಸಣ್ಣ ಪುಟ್ಟ ಸಂಗತಿಗಳು ನಮ್ಮ ಜೀವನಕ್ಕೆ ಆಧಾರ. ಉನ್ನತ ವ್ಯಾಸಂಗ ಮದಬೇಕೆನ್ನುವವರು ಇಂತಹ ಹಳ್ಳಿಯನ್ನು ಬಿಟ್ಟು ಒಂದಲ್ಲಾ ಒಂದು ದಿನ ಪಟ್ಟಣದೆಡೆಗೆ ಹೆಜ್ಜೆ ಹಾಕಲೇಬೇಕಾಗುತ್ತದೆ.

                  
ಹೊಸ ಜನ,ಹೊಸ ಸ್ಥಳ,ಹೊಸ ಪರಿಚಯಗಳು,ಹೊಸ ಅನುಭವಗಳು,ಹೊಸ ಸವಾಲುಗಳು ...
ಹೀಗೆ ಈ ಹೊಸ ಪ್ರಪಂಚ ಕಾಯಿ ಹಣ್ಣಾಗುವಂತೆ , ವ್ಯಕ್ತಿತ್ವ ವಿಕಸಿಸುವ ಸುವರ್ಣಾವಕಾಶವನ್ನು ನಮಗೊದಗಿಸುತ್ತದೆ.
"ಒಳ್ಳೆಯದು-ಕೆಟ್ಟದು" ಒಂದೇ ನಾಣ್ಯದ ಎರಡು ಮುಖಗಳಿದಂತೆ. ನಾವು ಬರುವ ಹೊಸ ಜಾಗದಲ್ಲಿ ಎಲ್ಲ ಒಳ್ಳೆಯದೇ ಇರುತ್ತದೆ ಎಂದೇನಲ್ಲ... ನಮ್ಮ ಗುರಿ ನಮ್ಮ ಧ್ಯೇಯಗಳನ್ನು ಮನದಲ್ಲಿಟುಕೊಂಡು ಹಂಸ ಹೇಗೆ ನೀರಿರುವ ಹಾಲಿನಲ್ಲಿ ಕೇವಲ ಹಾಲನ್ನು ಹೀರುವುದೋ ಹಾಗೆಯೇ ಉತ್ತಮ ಸಂಗತಿಗಳೊಂದಿಗೆ ಬೆಳೆಯಬೇಕು..
ವಿದ್ಯಾರ್ಥಿ ನಿಲಯಗಳಲ್ಲಿ ನೆಲೆಸುವ ಅನುಭವ ನಿಜವಾಗಿಯೂ ಅಪರೂಪ ಅನನ್ಯ.. ವಿವಿಧ ಪ್ರದೇಶದ ಜನರು,ಹಲವು ಬಗೆಯ ಭಾಷೆ,ವಿಧ ವಿಧವಾದ ಹವ್ಯಾಸ,ಹಲವು ಗುರಿ,  ಅನೇಕ ರೀತಿಯ ವ್ಯಕ್ತಿತ್ವ...ಎಲ್ಲರಲ್ಲಿ ಬೆರೆತು, ಎಲ್ಲರೊಳಗೊಂದಾಗುವ ಸ್ಥಳ ಹಾಸ್ಟೆಲ್... ಕೂಡಿ ಬಾಳುವ, ಹಂಚಿ ತಿನ್ನುವ,ಸುಖದಲ್ಲಿ ಸಂಭ್ರಮಿಸುವ,ದುಃಖದಲ್ಲಿ ಭಾಗಿಯಾಗುವ,ಒಬ್ಬರು ಮತ್ತೊಬ್ಬರನ್ನು ಸುಶೃಸಿ ಹಾರೈಕೆ ಮಾಡುವ .. ಒಟ್ಟಿನಲ್ಲಿ ಬದುಕಿನಲ್ಲಿ ಪರಿಪೂರ್ಣ ವ್ಯಕ್ತಿಯಾಗುವ ಗುಣಗಳನ್ನು ಕಲಿಸುತ್ತದೆ ಹಾಸ್ಟೆಲ್..

ನಗರ ಸೌಲಭ್ಯಗಳನ್ನು ಸವಿಯುತ್ತಾ,ತಂತ್ರಜ್ಞಾನವನ್ನು ರುಚಿಸುತ್ತಾ,ನವ್ಯ ಜೀವನ ಶೈಲಿಯನ್ನು ರೂಢಿಸಿಕೊಳುತ್ತ "ಹಳೆ ಬೇರು" ಹೊಸ ಚಿಗುರಿನ ಹೆಮ್ಮರವಾಗುತ್ತದೆ...
ಏನೇ ಆದರೂ ಹಳ್ಳಿಗೆ ಹೋದಾಗ ಹಳ್ಳಿಯವನಾಗಿರದೆ,ಪಟ್ಟಣದ ಅಹಂಕಾರಗಳನ್ನು ತೋರಿಸಿದರೆ ನಮ್ಮ ಗೌರವಕ್ಕೆ ಚುತಿ ಬರುವುದರಲ್ಲಿ ಯಾವುದೇ ಸಂದೇಹವಿಲ್ಲ ..

ನಾವಾಗಿಯೇ ಅಲ್ಲದಿದ್ದರೂ, ಕಾಲ ಚಕ್ರದಲ್ಲಿ ಮನೆಯಿಂದ ದೂರವಿರುತ್ತೇವೆ. ನಾವು ನಮ್ಮ ಸುಖ, ನಮ್ಮ ಸ್ನೇಹಿತರು, ನಮ್ಮ ಖುಷಿ ಇವುಗಳ ಮಧ್ಯೆ ಎಲ್ಲೋ ಕೆಲವೊಮ್ಮೆ ನಮ್ಮ ಪೋಷಕರಿಂದ ದೂರವಾಗುತ್ತಿದ್ದೇವೇನೋ,ಅವರ ಮೇಲಿನ ನಮ್ಮ ಬಂಧ ಪ್ರೀತಿಗಳು ಕಡಿಮೆಯಾಗುತಿದೆಯೋ ಎಂಬ ಭ್ರಮೆ ನಂನಂತು ಕಾಡಿದೆ ..
ಈ ಭ್ರಮೆ ಕಾಡದೇ "ದೂರವಿದ್ದವರ ಮೇಲೆಯೇ ಪ್ರೀತಿ ಜಾಸ್ತಿ" ಎಂಬ ಮಾತಿನಂತೆ ನಮನ್ನು ಹೆತ್ತವರ ಮೇಲೆ ನಮ್ಮ ಪ್ರೀತಿ ನಮ್ಮ ಗೌರವ ಹೆಚ್ಚಲಿ ಎಂಬ ಆಶಯ ...


 

3 comments:

  1. With time your blogs are maturing and are coming out with deep insights into life, keep it up. I always see glass as half full, hence what I would have liked to see in this topic is - how we come back to our roots and realise our dreams, rather than keep chasing them away from home always. We the better educated, well equipped folks should get serious and try to plough back all our experience into politics, entrepreneurship, education, health care etc., at the grass root level and stop this valsae from haLLi to city. Some of us have already started doing this, but needs to be done in a more significant way.

    ReplyDelete
  2. Thank you Vishnu for your encouraging words... Yeah definitely your words are alarming for all of us to gave a thought regarding what we can contribute to the growth and development of the place which played a great role in shaping our life...

    ReplyDelete
  3. Awesome Vinay... :)
    Your thoughts are very much true. I think everyone who has come from small town/village definately feel the same on one or the other day...!!! :)

    ReplyDelete