Saturday, March 23, 2013

ರಾಜಧರ್ಮ

                             
ಇತ್ತೀಚಿಗೆ ಸಾಮಾನ್ಯವಾಗಿ ಆಗಾಗ್ಗೆ ಒಂದು ವಾಕ್ಯ ಕಿವಿಗೆ ಬೀಳುತ್ತಿರುತ್ತದೆ... ಅದೇನೆಂದರೆ " ರಾಜಕೀಯವೇ ಹೊಲಸು " ಎನ್ನುವುದು...

ನೀವೂ ಸಹ ಈ ವಾಕ್ಯವನ್ನು ಅನುಮೋದಿಸುವುದಾದರೆ ನಿಮಗೆ ಕೆಲವು ಪ್ರಶ್ನೆಗಳಿವೆ...

೧. ನಮ್ಮ- ನಿಮ್ಮ ರಕ್ಷಣೆಯ ಕಾನೂನುಗಳನ್ನು ಮಾಡಿರುವವರು ಯಾರು? ಅದರ ಹೊಣೆ ಹೊತ್ತಿರುವವರು ಯಾರು?

೨. ನಿಮ್ಮ ಮನೆಗೆ ಪ್ರತಿನಿತ್ಯ ಹೇಗೆ ವಿದ್ಯುತ್,ನೀರು ಎಲ್ಲ ಹೇಗೆ ಸರಬರಾಜು ಆಗುತ್ತದೆ? 
   ಅಂತಹ ಸವಲತ್ತುಗಳಿಗೆ ಕಾನೂನು ರೂಪಿಸುವವರಾರು?

೩. ನೀವು ಓಡಾಡುವ ರಸ್ತೆ ಮಾಡಿಸಿದವರಾರು?

೪. ನೀವು ಉಡುವ ತೊಡುಗೆ,ತಿನ್ನುವ ಅನ್ನ ಎಲ್ಲದಕ್ಕೂ ಬೆಲೆ ನಿಗದಿಪಡಿಸಿದವರಾರು? 

೫. ನೀವು ಓದಲು ಯಾವುದೇ ವಿಷಯವನ್ನು ಆರಿಸಿಕೊಂಡರು,ಆ ವಿಷಯದಲ್ಲಿ ನೀವು ಕಲಿಯಬೇಕಾದ ಪಠ್ಯವನ್ನು ನಿರ್ಧರಿಸುವವರು ಯಾರು?

೬. ನಾವು ಮಾಡುವ ಕೆಲಸಗಳಲ್ಲಿ ಇದು ತಪ್ಪು ಇದು ಸರಿ ಎಂದು ನಿರ್ಧರಿಸುವ ಕಾನೂನು ಮಾಡುವವರಾರು ?

೭. ಇನ್ನು ಒಂದು ವಿಶೇಷ ಸಂಗತಿ ಹೇಳುತ್ತೇನೆ ... 
   ನೀವೇ ಕಷ್ಟ ಪಟ್ಟು ಸಂಪಾದಿಸುವ ಹಣದಲ್ಲಿ ಅಧಿಕಾರಯುತವಾಗಿ ಅದರ ಭಾಗವನ್ನು ತೆಗೆದುಕೊಳ್ಳುವವರಾರು ?

ಇಂತಹ ನೂರಾರು ಪ್ರಶ್ನೆಗಳಿಗೆ ಉತ್ತರ ಒಂದೇ ರಾಜಕೀಯ ಎನ್ನುವ ಕ್ಷೇತ್ರದ ಭಾಗವಾದ "ಸರ್ಕಾರ" .

ಒಂದು ದೇಶದ, ಒಂದು ಪ್ರದೇಶದ ನಾಗರೀಕರ ಅಷ್ಟೇ ಅಲ್ಲ ಪ್ರಾಣಿ ಪಕ್ಷಿಗಳ ಸವಲತ್ತುಗಳು, ಅವರ ರಕ್ಷಣೆ ,
ಸಮಾಜದ ಏಳಿಗೆ, ಅಲ್ಲಿನ ಭಾಷೆ,ಸಂಸ್ಕೃತಿ,ಆವಿಷ್ಕಾರ,ಪ್ರಾಕೃತಿಕ ವೈಪರೀತ್ಯ..
ಇಂತಹ ಹಲವಾರು ಸಂಗತಿಗಳ ಹೊಣೆಯ ನೊಗ ಹೊತ್ತು ಸಲಹುವ ರಾಜಧರ್ಮವೇ ರಾಜಕೀಯ .

ದಯವಿಟ್ಟು ಇನ್ನು ಮೇಲಾದರೂ "ರಾಜಕೀಯವೇ ಹೊಲಸು" ಎನ್ನುವ ಮಾತು "ರಾಜಕಾರಣಿಗಳೇ ಹೊಲಸು" ಎಂದು ವ್ಯಾಕರಣ ಶುದ್ದಿಯಾಗಲಿ..

ಹನ್ನಂದು ಜನರಾಡಿ ಕೋಟ್ಯಾಂತರ ಜನ ವೀಕ್ಷಿಸುವ ಕ್ರೀಡೆಗೆ, ಎರಡೂವರೆ ಗಂಟೆ ಮನೋರಂಜನೆ ಕೊಡುವ ಸಿನಿಮಾ ಕ್ಷೇತ್ರಕ್ಕೆ 
ಸಿಗುತ್ತಿರುವ ಗೌರವ ಮನ್ನಣೆ ಮಹತ್ತರವಾದ ರಾಜಕೀಯ ಕ್ಷೇತ್ರಕ್ಕೆ ಸಿಗುತ್ತಿಲ್ಲವಲ್ಲ ಎಂಬ ಖೇದ ಈ ಲೇಖನ ಬರೆಯಲು ಕಾರಣವಾಯ್ತು..
ಎಷ್ಟು ಜನ ಯುವಕರು ಯುವತಿಯರು ಇಲ್ಲಿ ನಡೆಯುವ ಸಂಗತಿಗಳನ್ನು ಚರ್ಚಿಸುತ್ತಾರೆ ,
ಈ ಕ್ಷೇತ್ರದೆಡೆಗೆ ಆಕರ್ಷಿತರಾಗುತ್ತಿದಾರೆ ನೀವೇ ಹೇಳಿ ?

ಇದಕ್ಕೆ ನಿಮ್ಮ ಉತ್ತರ ಏನೆಂಬುದು ನನಗೆ ಗೊತ್ತು.
ದಿನ ನಿತ್ಯದ ದೊಂಬರಾಟ ನೋಡಿ ಬೇಸತ್ತಿದೇವೆ ; ಕೋಟಿ ನೋಡಿಲ್ಲದ ನಾವು ಲಕ್ಷ ಕೋಟಿ ಹಗರಣ ನೋಡುವಂತಾಗಿದೆ, 
ಕಾನೂನು ರೂಪಿಸುವ ದೇವಾಲಯದಲ್ಲಿ ಅಂಗಿ ಹರಿದು ಮೇಜಿನ ಮೇಲೆ ಎದ್ದು ನಿಂತು ಕೂಗಾಡುವವರು, ಬ್ಲೂ ಫಿಲಂ ನೋಡುವವರು, 
ಸಂವಿಧಾನಿಕ ಉನ್ನತ ಹುದ್ದೆಯಲ್ಲಿದು ಸಮ್ಮಿಶ್ರ ಸರ್ಕಾರಗಳಲ್ಲಿ ಹಗರಣಗಳು ಸಾಮಾನ್ಯವೆನ್ನುವ ಹೊಣೆಗೇಡಿ ನಾಯಕರು ... 
ಇಂತವರಿರುವ ಕ್ಷೇತ್ರಕ್ಕೆ ಎಲ್ಲಿಂದ ಕೊಡಬೇಕು ಗೌರವ ಎನ್ನುವುದು ಅಲ್ಲವೇ ?


ಅಲ್ಲಾ  ಮ್ಯಾಚ್ ಫಿಕ್ಸಿಂಗ್ ಗಳು ಎಷ್ಟು ನಡೆದಿಲ್ಲ ... ಡ್ರಗ್ಸ್ ತೆಗೆದುಕೊಂಡು ಗೆದ್ದ ಪದಕವನ್ನು ಎಷ್ಟು ಜನ ಹಿಂತಿರುಗಿಸಿಲ್ಲ... 
ಇಂತಹ ಸಮಯದಲ್ಲೆಲ್ಲ ಕ್ರೀಡಾಪಟುವನ್ನು ಬೈಯುತ್ತೆವೆಯೇ ಹೊರತು ಇಡಿ ಕ್ರೀಡಾ ಕ್ಷೇತ್ರವನಲ್ಲವಲ್ಲ ... 
ಎಲ್ಲೋ ಒಂದಿಷ್ಟು ಕಾಮುಕ ಶಿಕ್ಷಕರಿದ್ದರೆ ಶಿಕ್ಷಣ ಕ್ಷೇತ್ರವನ್ನೇ ದೂರುತ್ತೆವೆಯೇ ?

ರಾಜಕೀಯದಲ್ಲಿ ಕೆಟ್ಟ ರಾಜಕಾರಣಿಗಳೇ ತುಂಬಿರಬಹುದು ಆದರೆ ಒಳ್ಳೆಯವರು ಇಲ್ಲವೇ ಇಲ್ಲ ಎಂಬ ಮಾತನ್ನು ಒಪ್ಪಲು ಸಾಧ್ಯವೆ ಇಲ್ಲ !!!

ಸರ್ಕಾರ ರಚಿಸಿ ಗದ್ದುಗೆಗಾಗಿ ನಡೆಯಬೇಕಾದ ನೈಪುಣ್ಯದ ತಂತ್ರಗಾರಿಗೆ ಐದು ವರ್ಷವೂ ಕುರ್ಚಿ ಉಳಿಸಿಕೊಳ್ಳುವುದರಲ್ಲಿಯೇ 
ಹೋಗುತ್ತಿದರೆ ಹೊಸ ಹೊಸ ಜನ ಹಿತ ಕಾರ್ಯಕ್ರಮಗಳು ನಿಯಮಗಳು ರೂಪಿಸಲು ಸಮಯವೆಲ್ಲಿರುತ್ತದೆ ?

ಇಷ್ಟೆಲ್ಲಾ ಕೆಟ್ಟದಕ್ಕೆ ಕಾರಣರಾದವರು ಕೇವಲ ರಾಜಕಾರಣಿಗಳೇ ? ಇದರಲ್ಲಿ ನಮ್ಮ ಹೊಣೆ ಏನೂ ಇಲ್ಲವೇ ...

ನಿಜ ಹೇಳಬೇಕೆಂದರೆ ನಾವೇ ಇದರ ರೂವಾರಿಗಳು ...

ಮೂರು ಪ್ರಮುಖ ಪ್ರಶ್ನೆಗಳು ...!!!

ನಮಲ್ಲಿ ಎಷ್ಟು ಜನ ಚುನಾವಣಾ ದಿನದಂದು ಮನೆಯಿಂದ ಹೊರ ಹೋಗಿ ಮತದಾನದ ನಮ್ಮ ಹಕ್ಕನ್ನು ಚಲಾಯಿಸುತ್ತೇವೆ ?

ಪಂಚ ವರ್ಷಗಳಿಗೊಮ್ಮೆ ಬರುವ ನಮ್ಮ ಹಕನ್ನು ಹಣ,ಹೆಂಡ,ಸೀರೆ,ಪಂಚೆಗಳಿಗೆ ಮಾರಿಕೊಳ್ಳುವವರು ಎಷ್ಟು ಜನ ...?

ಜಾತಿಯಿಂದ ಪಕ್ಷ, ಅಭ್ಯರ್ಥಿಗಳನ್ನು ಬೆಂಬಲಿಸುವವರು ಎಷ್ಟು ಜನ...?



ಆಗಾದರೆ ಇದಕೆಲ್ಲ ಪರಿಹಾರವೇ ಇಲ್ಲವೇ ?

ಪೃಥ್ವಿ ಚಲನಚಿತ್ರದಲ್ಲಿ ಒಂದು ಸಂಭಾಷಣೆ ಇದೆ... "ಬಡವರಿಗೆ ಎಥಿಕ್ಸ್  ಗಿಂತ ಹಸಿವು ಮುಖ್ಯ ಎನ್ನುವುದು ..." 

ಇಂತಹ ವರ್ಗಕ್ಕೆ, ಒಳ್ಳೆಯ ಅಭ್ಯರ್ಥಿಗಳನ್ನು ಬೆಂಬಲಿಸಿ ಎಂದು ಸ್ವಯಂ ಪ್ರೇರಣೆಯಿಂದ advertisement 
ಕೊಡುವ ಸಾಮಾಜಿಕ ಜವಾಬ್ದಾರಿ ನಮ್ಮ media ಗಳಿಗೆ ಬರುವಂತಾಗಬೇಕು ... 
ಏಕೆಂದರೆ ಅದೊಂದೇ ಅವರನ್ನು ತಲುಪುವ ಸುಲಭ ಮಾರ್ಗ..
"ಕಳ್ಳರು ಕೊಡುವ ಹಣ ಕೊಳ್ಳೆ ಹೊಡೆಯಿರಿ ಆದರೆ ಮತದಾನ ಒಳ್ಳೆಯವರಿಗೆ ಮಾಡಿರಿ " ಎಂದು ತಿಳಿ ಹೇಳಬೇಕು ...



ಇನ್ನು so called literates..ನಾವುಗಳು ಪಕ್ಷವನ್ನು ನೋಡಿ ಮತವಾಕಬಾರದು. 
ವ್ಯಕ್ತಿಯನ್ನು ನೋಡಿ ಮತವಾಕಬೇಕು.. lets  ask  their complete background ... 
ಒಂದು ಕ್ರಿಮಿನಲ್ ಮೊಕೊದ್ದಮೆಯ ಸೋಂಕು ತಗುಲಿರದ ವ್ಯಕ್ತಿಯನ್ನು ನಾವು ನಮ್ಮ ನಾಯಕನನ್ನಾಗಿ ಆರಿಸಬೇಕು ... 
ಆತನ ಮೇಲೆ ಅಪರಾದದ ಆರೋಪ ಬಂದರು ಆತ ಅನರ್ಹ .. 
ಆತ ಓದಿದ್ದರು ಸರಿ ಓದದಿದ್ದರೂ ಸರಿ .. ನಮ್ಮ ಪ್ರಥಮ ಆದ್ಯತೆ ಕ್ಲೀನ್ ಪರ್ಸನ್ ...
ರಾಜಕಾರಣಿಗಳಿಗೆ ಬೇಕಿರುವುದು ಒಳ್ಳೆಯದನ್ನು ಮಾಡಬೇಕೆಂದಿರುವ ಮನ ...

ಇದರಿಂದ ಒಂದು ತೊಂದರೆ ಎದುರಾಗಬಹುದು ... ಅತಂತ್ರ ವಿಧಾನಸಭೆ ... hung  parliament ... 
ಪದೇ ಪದೇ  ಚುನಾವಣೆ ನಡೆಯುವುದರಿಂದ ಸರ್ಕಾರದ ರಾಜಸ್ವಕ್ಕೆ ಧಕ್ಕೆಯೂ ಆಗಬಹುದು. 
ಆದರೇ ಉತ್ತಮರನ್ನು ನಿಲ್ಲಿಸಬೇಕು... ಕೊಲೆಗಡುಕರು,ರೌಡಿಗಳು,ಕಾಮುಕರು,ಕಳ್ಳರು ಇವರುಗಳಿಗೆ ಮತ ಬೀಳುವುದಿಲ್ಲ 
ಎಂಬ ಸ್ಪಷ್ಟ ಸಂದೇಶ ರಾಜಕೀಯ ಪಕ್ಷಗಳಿಗೆ ಕೊಡಬಹುದು...
ಒಮ್ಮೆ ಉತ್ತಮ ವ್ಯಕ್ತಿಯನ್ನು ಆರಿಸಿ ಕಳುಹಿಸಿದ ನಂತರ ಆತನ ಕೆಲಸವನ್ನು ನೋಡಿ ಮುಂದೆ ಮತ್ತೊಮ್ಮೆ ಆತನನ್ನು 
ಗೆಲಿಸಬೇಕೋ ಬೇಡವೋ ಎಂದು ನಿರ್ಧರಿಸಬೇಕು.



ಒಂದು ಕ್ಷೇತ್ರದಲ್ಲಿ ಯಾರೂ ಉತ್ತಮ ಯೋಗ್ಯ ಅಭ್ಯರ್ಥಿ ಇಲ್ಲದಿದ್ದರೆ Lets go to voting booth and say 
"ಇಲ್ಲಿ ನನ್ನ ಕ್ಷೇತ್ರವನ್ನು ಪ್ರತಿನಿಧಿಸುವ ಯೋಗ್ಯತೆ ಯಾರಿಗೂ ಇಲ್ಲ ...ಅದಕ್ಕಾಗಿ  ನಾನು ಯಾರಿಗೂ ಮತದಾನ ಮಾಡುವುದಿಲ್ಲ ಎಂದು".
ಇಂತ ಸಂದರ್ಭದಲ್ಲಿ your vote is registered...

ಇದಕಿಂತ ಮುಖ್ಯವಾಗಿ ಸಮಾಜ ಶಾಸ್ತ್ರ ಬೋಧಿಸುವ ಶಿಕ್ಷಕರು,ಮಕ್ಕಳಿಗೆ ಚುನಾವಣೆ,ಮತದಾನ,ಸರ್ಕಾರ ಇವುಗಳ ಮಹತ್ವವನ್ನು ಹೇಳಬೇಕು..
ಬೆಳೆಯುವ ಪೈರು ಮೊಳಕೆಯಲ್ಲಿ ಎನ್ನುವಂತೆ ಪ್ರೌಡಶಾಲೆಯಲ್ಲೇ ತಿಳಿ ಹೇಳಿದರೆ ದುಡ್ಡು ತೆಗೆದುಕೊಳ್ಳದೆ, ಜಾತಿ ನೋಡದೇ 
ಉತ್ತಮ ಅಭ್ಯಥಿಗಳನ್ನು ಆರಿಸುವಂತಹ ಮತದಾರ ಹುಟ್ಟುವುದು ...

೨೦೧೩ ರ ಮೇ ತಿಂಗಳು ಬರುತ್ತಿದೆ ... ೨೦೧೪ ಬರುತ್ತದೆ ... ತಪ್ಪದೇ  ನಾವುಗಳು ನಮ್ಮ ಹಕ್ಕನ್ನು ಚಲಾಯಿಸೋಣ ...

and  ha ಪ್ಲೀಸ್ ಡೋಂಟ್ forget  ರಾಜಕೀಯ ಹೊಲಸಲ್ಲ .. ರಾಜಕಾರಣಿಗಳು ....